ಕನ್ನಡ

ಶಾಲೆಯ ಪ್ರಕಾರ್ಯಗಳು

ಕೃಷಿ ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನಾ ಶಾಲೆ

·       ರೈತರಿಗೆ ಆಹಾರ ಭದ್ರತೆ ಮತ್ತು ಆದಾಯ ಭದ್ರತೆಗಾಗಿ ಬೆಳೆ ಉತ್ಪಾದನೆಯ ಕಾರ್ಯತಂತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.

·       ಅಂತರ್ಗತ ಮಾರುಕಟ್ಟೆ ವ್ಯವಸ್ಥೆ ಮತ್ತು ಸರಬರಾಜು ಸರಪಣಿ ವ್ಯವಸ್ಥಾಪನೆ, ದಾಸ್ತಾನು ಹಾಗೂ ಸಕಲ ಹಿಮ್ಮುಖ ಮತ್ತು ಮುಮ್ಮುಖ ಸಂಬಂಧಗಳನ್ನು (backward and forward linkages) ಅಭಿವೃದ್ಧಿ ಪಡಿಸುವುದು.

·       ಕೃಷಿ ಮತ್ತು ಕೃಷಿಯೇತರ ವಲಯಗಳ ಆದಾಯವನ್ನು ಉತ್ತೇಜಿಸಲು ಕೃಷಿ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಕಾರ್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

·       ಮಾರುಕಟ್ಟೆಗಳ ಮತ್ತು ದರಗಳ ಅಪಾಯ ಸಾಧ್ಯತೆಗಳಿಂದ ಮತ್ತು ಅನಿಶ್ಚಿತತೆಗಳಿಂದ ರೈತರನ್ನು ರಕ್ಷಿಸಿ ಅವರ ನೇರ ಭಾಗವಹಿಸುವಿಕೆಯೊಂದಿಗೆ ಕೃಷಿ ಮತ್ತು ಕೃಷಿ ವ್ಯವಹಾರ ಉದ್ಯಮಗಳನ್ನು ಬೆಂಬಲಿಸಲು ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ಹಣಕಾಸು, ಸಾಲ ಮತ್ತು ಬೆಳೆ ವಿಮೆಯನ್ನು ಖಚಿತಪಡಿಸುವುದು.

·       ಉತ್ಪಾದಕತೆ ಮತ್ತು ಕೃಷಿ ವ್ಯವಹಾರದ ಲಾಭದಾಯಕತೆಯನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ, ತೋಟಗಾರಿಕೆ ಹಾಗೂ ಪೂರಕ ವ್ಯವಹಾರಗಳ ಬಗೆಗೆ ಸಮುಚಿತ ನೀತಿಗಳನ್ನು ಸೂಚಿಸುವುದು.

·       ಮಾನವ ಪೌಷ್ಠಿಕತೆ ಕುರಿತು ಒತ್ತು ನೀಡುವ ಜೊತೆಗೆ ಸಮಗ್ರ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

·       ಕೃಷಿ ವ್ಯವಹಾರದಲ್ಲಿ ಮಾರುಕಟ್ಟೆ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುವುದು ಹಾಗೂ ವಿವಿಧ ಹಣ್ಣುಗಳು, ತರಕಾರಿ ಬೆಳೆಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಗಾಗಿ ಪ್ರತಿ ವರ್ಷ ಋತುವಿನಿಂದ ಋತುವಿಗೆ ವಿಸ್ತರಣಾ ಸೇವೆಗಳ ಮೂಲಕ ರೈತರಿಗೆ ಮಾಹಿತಿಗಳನ್ನು ಒದಗಿಸುವುದು.        

·       ಕೃಷಿಕರನ್ನು ವ್ಯವಹಾರಸ್ಥರನ್ನಾಗಿ ಭಾಗಿಯಾಗಿಸಿ ಕೃಷಿ ವ್ಯವಹಾರದ ಮುಖಾಂತರ ಕರ‍್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ಕೃಷಿಯ ಅಸ್ಥಿರತೆಯು ಕಡಿಮೆಯಾಗುವುದು ಮತ್ತು ಕೃಷಿ ಕರ‍್ಯಾಚರಣೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದು. ಮಿಶ್ರ ಆಹಾರ ಬೆಳೆಗಳು ಮತ್ತು ನಗದು ಬೆಳೆಗಳು ರೈತರ ಕೈಗೆ ಹೆಚ್ಚು ಆದಾಯವನ್ನು ತಂದುಕೊಡುವುದು.

·       ಕೃಷಿ ವ್ಯವಹಾರ ಪ್ರವೃತ್ತವಾಗಿರುವ ರಫ್ತನ್ನು ಉತ್ತೇಜಿಸುವುದು. ವಿಶೇಷವಾಗಿ ಜೈವಿಕ ಗೊಬ್ಬರವನ್ನು ಬಳಸಿ ಬೆಳೆದಿರುವ ಭಾರತದ ಹಣ್ಣು, ಆಹಾರ ಮತ್ತು ಔಷಧಿಯ ಸುಗಂಧ ಮೂಲಿಕೆಗಳಿಗೆ ಬೇಡಿಕೆಯಿರುವುದು. ವಿಶ್ವವಿದ್ಯಾನಿಲಯವು ಈ ರಫ್ತು ಸಾಮರ್ಥ್ಯದ ಪ್ರಯೋಜನವನ್ನು ಪಡೆಯುವುದು ಮತ್ತು ಆಧುನಿಕ ವ್ಯಾಪಾರ ಅವಕಾಶಗಳ ಅನುಕೂಲತೆಗಳನ್ನು ಪಡೆದುಕೊಳ್ಳುವುದು.

·       ಲಾಭದಾಯಕತೆ ಮತ್ತು ಪರಿಣಾಮಕಾರಿ ವಿಸ್ತರಣಾ ಸೇವೆಗಳನ್ನು ಉತ್ತಮಪಡಿಸಲು ಕೃಷಿ ಕ್ರಮೋಪಾಯಗಳಿಗಾಗಿ ಅಪಾಯ ಸಾಧ್ಯತಾ ನಿರ್ವಹಣಾ ಕಾರ್ಯತಂತ್ರಗಳ ಮುಖಾಂತರ ಗ್ರಾಮೀಣ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಸಬಲೀಕರಿಸುವುದು.

·       ಆಹಾರ ಸಂರಕ್ಷಣೆ, ಕೃಷಿ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು, ಶ್ರೇಣೀಕರಣ ಮಾಡುವುದು ಮತ್ತು ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ನಾವಿನ್ಯತಾ ತಂತ್ರಜ್ಞಾನಗಳಿಗಾಗಿ ಕಾರ್ಯನಿರ್ವಹಿಸುವುದು.

·       ವಿಶೇಷ ಕೃಷಿ ವ್ಯವಹಾರ ಮಾದರಿಗಳನ್ನು ವಿಕಾಸಗೊಳಿಸಲು ಮುಖ್ಯ ವ್ಯವಸ್ಥಾಪನಾ ವಿಧಾನಗಳ ಸಮರ್ಪಕ ಸಂಯೋಜನೆಯೊಂದಿಗೆ ವ್ಯವಹಾರ ಸ್ನೇಹಿ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.

·       ವ್ಯಾಪಾರ ಸಮಾವೇಶಗಳು, ಕೃಷಿ ಮೇಳಗಳು, ಕೃಷಿ ಯೋಜನೆಗಳು ಮುಂತಾದವುಗಳಂಥ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

14
May
ಮೈಸೂರು ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
24
Apr
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ "ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ Read More
22
Apr
ಬೀದರ್ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ(2ನೇ ಬ್ಯಾಚ್)” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
16
Apr
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More


Follow us on