English

ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರದ ಪ್ರಕಾರ್ಯಗಳು

1.ವಿಶ್ವವಿದ್ಯಾಲಯದ ಎಲ್ಲಾ ಸಂಶೋಧನೆ ಮತ್ತು ಅನ್ವೇಷಣಾ ಚಟುವಟಿಕೆಗಳನ್ನು ಕುಲಪತಿಗಳ ನಿಯಂತ್ರಣದಡಿ  ವಿನಿಯಮಗಳಲ್ಲಿ ನಿಯಮಿಸಲಾದ ರೂಢಿಗಳ ಅನುಸಾರವಾಗಿ ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರದ ಅಡಿಯಲ್ಲಿ ಅಧಿಕಾರಿಗಳು ಅಥವಾ ಬೋಧಕರು ಅಥವಾ ಸಂಶೋಧಕರ ಮೂಲಕ ನಿರ್ವಹಿಸತಕ್ಕದ್ದು.

2.ಸಂಶೋಧನೆ ಮತ್ತು ಅನ್ವೇಷಣೆ ಕೇಂದ್ರವು ಮುಂದಿನವುಗಳ ಶಿಫಾರಸ್ಸುಗಳನ್ನು ಮಾಡತಕ್ಕದ್ದು,-

(i)ಪರಿಣಾಮಕಾರಿ ಸಮನ್ವಯತೆಯನ್ನು ವೃದ್ಧಿಸುವ ದೃಷ್ಟಿಯೊಂದಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಇನ್ನಿತರ ಸಂಬoಧಿತ ವಸ್ತು ವಿಷಯಗಳಲ್ಲಿ ಹಲವಾರು ವಿಶ್ವ ವಿದ್ಯಾಲಯ ಘಟಕಗಳ ಮೂಲಕ ಕೈಗೆತ್ತಿಕೊಳ್ಳುವ ಅಥವಾ ಕೈಗೆತ್ತಿಕೊಳ್ಳಬೇಕಾದ ಸಂಶೋಧನಾ ಕಾರ್ಯಕ್ರಮಗಳು ಮತ್ತು ಯೋಜನೆಗಳು;

(ii)ಸಂಶೋಧನಾ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಅಗತ್ಯವಿರುವ ಭೌತಿಕ, ವಿತ್ತೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳು;

(iii)ಗ್ರಾಮೀಣ ಮಧ್ಯಸ್ಥಗಾರರ(stakeholders) ಅಗತ್ಯತೆಗಳನ್ನು ಪೂರೈಸಲು ಸಂಶೋಧನೆಯನ್ನು ಅಭಿಮುಖವಾಗಿಸುವುದು;

(iv)ಭೋದನೆಯಲ್ಲಿ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಸಂಶೋಧನೆ, ವಿಸ್ತರಣೆ, ಬೋಧನೆ ಹಾಗೂ ಸಂಶೋಧನಾಕಾರರ ಭಾಗವಹಿಸುವಿಕೆಯನ್ನು ಸಂಯೋಜನೆಗೊಳಿಸುವುದು;

(v)ಸoಶೋಧನೆಯಲ್ಲಿ ಸಾರ್ವಜನಿಕ, ಖಾಸಗಿ ಮತ್ತು ಗ್ರಾಮೀಣ ಸಮುದಾಯವನ್ನು ಪೋಷಿಸುವುದು ಮತ್ತು ಸಮನ್ವಯಗೊಳಿಸುವುದು;

(vi)ಅಪ್ಪಟ, ಅನ್ವಯಿಕ ಮತ್ತು ಭಾಗೀದಾರಿಕ ಸಂಶೋಧನೆ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಗೆ ಬೆಂಬಲಿಸುವ ಅಂಶಗಳು;

(vii)ಸಮುದಾಯಗಳು, ಸರ್ಕಾರ, ಸಂಬoಧಪಟ್ಟ ಸಂಶೋಧನಾ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಘಟನೆಗಳು ಮತ್ತು ಸಂಸ್ಥೆಗಳು ಒಳಗೊಂಡoತೆ, ಇನ್ನಿತರ ಅಭಿವೃದ್ಧಿ ಏಜೆನ್ಸಿಗಳೊಂದಿಗೆ ಪಾಲುದಾರಿಕೆಯಲ್ಲಿ ವಿನೂತನ ಚಟುವಟಿಕೆಗಳು, ಅಭಿವೃದ್ಧಿ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು;

(viii)ಪರಸ್ಪರ ಕಲಿಕೆ (cross learning)ವಿನಿಮಯ ಹಾಗೂ ಸಂಶೋಧನಾ ಉದ್ದೇಶಗಳಿಗಾಗಿ ರಾಜ್ಯ ಅಥವಾ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಪಾಲುದಾರಿಕೆ;

(ix)ಸ್ವಾವಲಂಬನೆಯನ್ನು ಸಾಧಿಸಲು ಪರಿಣಾಮಕಾರಿ ಬಳಕೆಗಾಗಿ ಇಂಧನ ಮಾಧ್ಯಮಗಳನ್ನು (ವಿದ್ಯುತ್, ಕಟ್ಟಿಗೆ, ಗಾಳಿ, ಜೈವಿಕ ಅನಿಲ, ಜೀವರಾಶಿ, ಸೌರ) ಮತ್ತು ವ್ಯವಸ್ಥೆಗಳನ್ನು ಒಟ್ಟುಗೂಡಿಸುವುದು;

(x)ಗ್ರಾಮೀಣ ಸಮುದಾಯಗಳಲ್ಲಿ ರೂಢಿಯಲ್ಲಿರುವ ಜನಾಂಗೀಯ ಸಾಂಸ್ಕೃತಿಕ ಪರಂಪರೆ, ಪಾರಂಪರಿಕ ಜ್ಞಾನ ಕೌಶಲತೆ ಮತ್ತು ವ್ಯವಹಾರ ಚಾತುರ್ಯದ ಮೌಲ್ಯಮಾಪನ ಮತ್ತು ವಾಣಿಜ್ಯಕರಣಗೊಳಿಸುವುದಕ್ಕಾಗಿ ಹಾಗೂ ಅನ್ವೇಷಣಾದಾರರಿಗೆ ಹಾಗೂ ಹಿತಾಸಕ್ತರಿಗೆ ಆರ್ಥಿಕ ಲಾಭವನ್ನು ನೀಡುವುದಕ್ಕಾಗಿ ಸಂಶೋಧನಾ ಅವಕಾಶಗಳನ್ನು ಸೃಜಿಸುವುದು;

(xi)ಸಮಗ್ರ ಕೃಷಿ ವ್ಯವಸ್ಥೆ ಮಾರ್ಗದ (ಕೃಷಿ - ತೋಟಗಾರಿಕೆವೃಕ್ಷ ಕೃಷಿ - ಪಶುಸಂಗೋಪನೆ) ಮುಖಾಂತರ ವಿವೇಕಯುತ ಪ್ರಾಕೃತಿಕ ಸಂಪನ್ಮೂಲ ನಿರ್ವಹಣಾ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತು ಅತ್ಯಧಿಕ ಆದಾಯ ಉತ್ಪತ್ತಿ ಮಾಡುವ ಮುಖಾಂತರ ಕೃಷಿ ಉತ್ಪಾದನೆಯನ್ನು ಉತ್ತಮಗೊಳಿಸಲು ನೀತಿಗಳನ್ನು ರೂಪಿಸುವುದು ಹಾಗೂ ಆಚರಣೆಗಳನ್ನು ಉತ್ತೇಜಿಸುವುದು;

(xii)ಗ್ರಾಮೀಣ ಮೂಲಸೌಕರ್ಯ, ಕೃಷಿ ಮತ್ತು ಕೃಷಿಯೇತರ ಆಧಾರಿತ ಕೈಗಾರಿಕೆಗಳು, ಉದ್ಯಮಶೀಲತ್ವ ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಂಬAಧಗಳಿಗಾಗಿ, ಉದ್ಯೋಗ ಮತ್ತು ಸಂಪತ್ತು ಸೃಜನೆಗೆ ಅವಕಾಶ ನೀಡುವ ಮತ್ತು ನಗರಗಳಿಗೆ ವಲಸೆಯನ್ನು ತಪ್ಪಿಸಲು ಸಹಾಯಕವಾಗುವ ನೀತಿಗಳು.

(xiii)ವಿಶ್ವವಿದ್ಯಾಲಯದ ಕುಲಪತಿಗಳು ಅಥವಾ ಕಾರ್ಯನಿರ್ವಾಹಕ ಪರಿಷತ್ತು ಅಥವಾ ಇತರ ಯಾವುದೇ ಪ್ರಾಧಿಕಾರವು ಪ್ರಸ್ತಾಪಿಸಬಹುದಾದಂತಹ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಬAಧಿಸಿದ ಇತರ ಯಾವುವೇ ವಿಚಾರಗಳು.


ಡಾ. ಗಿರೀಶ್ ದೀಕ್ಷಿತ್

ಸಹಾಯಕ ನಿರ್ದೇಶಕರು

ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರ

ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯ, ಗದಗ



Read More

ಸುದ್ದಿ ಮತ್ತು ಪ್ರಕಟಣೆ

1
Mar
  • :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಫಲಿಂತಾಶ ಪಟ್ಟಿ
25
Feb
2022-23 ಸಾಲಿನ ಎಂ.ಬಿ.ಎ (ಗ್ರಾಮೀಣ ನಿರ್ವಹಣೆ) ಪ್ರೋಗ್ರಾಮ್ ಪ್ರವೇಶಕ್ಕಾಗಿ ಎರಡನೇ ಸುತ್ತಿನ ತಾತ್ಕಾಲಿಕ ಅರ್ಹತೆ/ಆಯ್ಕೆ ಪಟ್ಟಿ
21
Feb
MBA UET ಶ್ರೇಣಿ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ 2022-23
1
Feb
ಸ್ವಗ್ರಾಮ ಫೆಲೋಶಿಪ್" ಆಯ್ಕೆಯಾಗಿರುವ 75 ತಂಡಗಳ ಪಟ್ಟಿ

ಕಾರ್ಯಕ್ರಮಗಳು

21
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ನಲ್ಲಿ “ರಾಷ್ಟ್ರೀಯ ಏಕೀಕರಣ ಶಿಬಿರ” ಉದ್ಘಾಟನಾ ಸಮಾರಂಭ Read More
20
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ “ಎಸ್.ಬಿ.ಐ ಜನ-ವನ” ಕಾರ್ಯಕ್ರಮದ ಉದ್ಘಾಟನೆ Read More
10
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಆಮಂತ್ರಣ ಪತ್ರಿಕೆ Read More
1
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಉದ್ಘಾಟನೆ Read More


Follow us on