English
ಶಾಲೆಯ ಪ್ರಕಾರ್ಯಗಳು

ಕೃಷಿ ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನಾ ಶಾಲೆ

·       ರೈತರಿಗೆ ಆಹಾರ ಭದ್ರತೆ ಮತ್ತು ಆದಾಯ ಭದ್ರತೆಗಾಗಿ ಬೆಳೆ ಉತ್ಪಾದನೆಯ ಕಾರ್ಯತಂತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.

·       ಅಂತರ್ಗತ ಮಾರುಕಟ್ಟೆ ವ್ಯವಸ್ಥೆ ಮತ್ತು ಸರಬರಾಜು ಸರಪಣಿ ವ್ಯವಸ್ಥಾಪನೆ, ದಾಸ್ತಾನು ಹಾಗೂ ಸಕಲ ಹಿಮ್ಮುಖ ಮತ್ತು ಮುಮ್ಮುಖ ಸಂಬಂಧಗಳನ್ನು (backward and forward linkages) ಅಭಿವೃದ್ಧಿ ಪಡಿಸುವುದು.

·       ಕೃಷಿ ಮತ್ತು ಕೃಷಿಯೇತರ ವಲಯಗಳ ಆದಾಯವನ್ನು ಉತ್ತೇಜಿಸಲು ಕೃಷಿ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಕಾರ್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

·       ಮಾರುಕಟ್ಟೆಗಳ ಮತ್ತು ದರಗಳ ಅಪಾಯ ಸಾಧ್ಯತೆಗಳಿಂದ ಮತ್ತು ಅನಿಶ್ಚಿತತೆಗಳಿಂದ ರೈತರನ್ನು ರಕ್ಷಿಸಿ ಅವರ ನೇರ ಭಾಗವಹಿಸುವಿಕೆಯೊಂದಿಗೆ ಕೃಷಿ ಮತ್ತು ಕೃಷಿ ವ್ಯವಹಾರ ಉದ್ಯಮಗಳನ್ನು ಬೆಂಬಲಿಸಲು ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ಹಣಕಾಸು, ಸಾಲ ಮತ್ತು ಬೆಳೆ ವಿಮೆಯನ್ನು ಖಚಿತಪಡಿಸುವುದು.

·       ಉತ್ಪಾದಕತೆ ಮತ್ತು ಕೃಷಿ ವ್ಯವಹಾರದ ಲಾಭದಾಯಕತೆಯನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ, ತೋಟಗಾರಿಕೆ ಹಾಗೂ ಪೂರಕ ವ್ಯವಹಾರಗಳ ಬಗೆಗೆ ಸಮುಚಿತ ನೀತಿಗಳನ್ನು ಸೂಚಿಸುವುದು.

·       ಮಾನವ ಪೌಷ್ಠಿಕತೆ ಕುರಿತು ಒತ್ತು ನೀಡುವ ಜೊತೆಗೆ ಸಮಗ್ರ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

·       ಕೃಷಿ ವ್ಯವಹಾರದಲ್ಲಿ ಮಾರುಕಟ್ಟೆ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುವುದು ಹಾಗೂ ವಿವಿಧ ಹಣ್ಣುಗಳು, ತರಕಾರಿ ಬೆಳೆಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಗಾಗಿ ಪ್ರತಿ ವರ್ಷ ಋತುವಿನಿಂದ ಋತುವಿಗೆ ವಿಸ್ತರಣಾ ಸೇವೆಗಳ ಮೂಲಕ ರೈತರಿಗೆ ಮಾಹಿತಿಗಳನ್ನು ಒದಗಿಸುವುದು.        

·       ಕೃಷಿಕರನ್ನು ವ್ಯವಹಾರಸ್ಥರನ್ನಾಗಿ ಭಾಗಿಯಾಗಿಸಿ ಕೃಷಿ ವ್ಯವಹಾರದ ಮುಖಾಂತರ ಕರ‍್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ಕೃಷಿಯ ಅಸ್ಥಿರತೆಯು ಕಡಿಮೆಯಾಗುವುದು ಮತ್ತು ಕೃಷಿ ಕರ‍್ಯಾಚರಣೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದು. ಮಿಶ್ರ ಆಹಾರ ಬೆಳೆಗಳು ಮತ್ತು ನಗದು ಬೆಳೆಗಳು ರೈತರ ಕೈಗೆ ಹೆಚ್ಚು ಆದಾಯವನ್ನು ತಂದುಕೊಡುವುದು.

·       ಕೃಷಿ ವ್ಯವಹಾರ ಪ್ರವೃತ್ತವಾಗಿರುವ ರಫ್ತನ್ನು ಉತ್ತೇಜಿಸುವುದು. ವಿಶೇಷವಾಗಿ ಜೈವಿಕ ಗೊಬ್ಬರವನ್ನು ಬಳಸಿ ಬೆಳೆದಿರುವ ಭಾರತದ ಹಣ್ಣು, ಆಹಾರ ಮತ್ತು ಔಷಧಿಯ ಸುಗಂಧ ಮೂಲಿಕೆಗಳಿಗೆ ಬೇಡಿಕೆಯಿರುವುದು. ವಿಶ್ವವಿದ್ಯಾನಿಲಯವು ಈ ರಫ್ತು ಸಾಮರ್ಥ್ಯದ ಪ್ರಯೋಜನವನ್ನು ಪಡೆಯುವುದು ಮತ್ತು ಆಧುನಿಕ ವ್ಯಾಪಾರ ಅವಕಾಶಗಳ ಅನುಕೂಲತೆಗಳನ್ನು ಪಡೆದುಕೊಳ್ಳುವುದು.

·       ಲಾಭದಾಯಕತೆ ಮತ್ತು ಪರಿಣಾಮಕಾರಿ ವಿಸ್ತರಣಾ ಸೇವೆಗಳನ್ನು ಉತ್ತಮಪಡಿಸಲು ಕೃಷಿ ಕ್ರಮೋಪಾಯಗಳಿಗಾಗಿ ಅಪಾಯ ಸಾಧ್ಯತಾ ನಿರ್ವಹಣಾ ಕಾರ್ಯತಂತ್ರಗಳ ಮುಖಾಂತರ ಗ್ರಾಮೀಣ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಸಬಲೀಕರಿಸುವುದು.

·       ಆಹಾರ ಸಂರಕ್ಷಣೆ, ಕೃಷಿ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು, ಶ್ರೇಣೀಕರಣ ಮಾಡುವುದು ಮತ್ತು ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ನಾವಿನ್ಯತಾ ತಂತ್ರಜ್ಞಾನಗಳಿಗಾಗಿ ಕಾರ್ಯನಿರ್ವಹಿಸುವುದು.

·       ವಿಶೇಷ ಕೃಷಿ ವ್ಯವಹಾರ ಮಾದರಿಗಳನ್ನು ವಿಕಾಸಗೊಳಿಸಲು ಮುಖ್ಯ ವ್ಯವಸ್ಥಾಪನಾ ವಿಧಾನಗಳ ಸಮರ್ಪಕ ಸಂಯೋಜನೆಯೊಂದಿಗೆ ವ್ಯವಹಾರ ಸ್ನೇಹಿ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.

·       ವ್ಯಾಪಾರ ಸಮಾವೇಶಗಳು, ಕೃಷಿ ಮೇಳಗಳು, ಕೃಷಿ ಯೋಜನೆಗಳು ಮುಂತಾದವುಗಳಂಥ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸುವುದು.

ಕೃಷಿ ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನಾ ಶಾಲೆ

·       ರೈತರಿಗೆ ಆಹಾರ ಭದ್ರತೆ ಮತ್ತು ಆದಾಯ ಭದ್ರತೆಗಾಗಿ ಬೆಳೆ ಉತ್ಪಾದನೆಯ ಕಾರ್ಯತಂತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.

·       ಅಂತರ್ಗತ ಮಾರುಕಟ್ಟೆ ವ್ಯವಸ್ಥೆ ಮತ್ತು ಸರಬರಾಜು ಸರಪಣಿ ವ್ಯವಸ್ಥಾಪನೆ, ದಾಸ್ತಾನು ಹಾಗೂ ಸಕಲ ಹಿಮ್ಮುಖ ಮತ್ತು ಮುಮ್ಮುಖ ಸಂಬಂಧಗಳನ್ನು (backward and forward linkages) ಅಭಿವೃದ್ಧಿ ಪಡಿಸುವುದು.

·       ಕೃಷಿ ಮತ್ತು ಕೃಷಿಯೇತರ ವಲಯಗಳ ಆದಾಯವನ್ನು ಉತ್ತೇಜಿಸಲು ಕೃಷಿ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಕಾರ್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

·       ಮಾರುಕಟ್ಟೆಗಳ ಮತ್ತು ದರಗಳ ಅಪಾಯ ಸಾಧ್ಯತೆಗಳಿಂದ ಮತ್ತು ಅನಿಶ್ಚಿತತೆಗಳಿಂದ ರೈತರನ್ನು ರಕ್ಷಿಸಿ ಅವರ ನೇರ ಭಾಗವಹಿಸುವಿಕೆಯೊಂದಿಗೆ ಕೃಷಿ ಮತ್ತು ಕೃಷಿ ವ್ಯವಹಾರ ಉದ್ಯಮಗಳನ್ನು ಬೆಂಬಲಿಸಲು ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ಹಣಕಾಸು, ಸಾಲ ಮತ್ತು ಬೆಳೆ ವಿಮೆಯನ್ನು ಖಚಿತಪಡಿಸುವುದು.

·       ಉತ್ಪಾದಕತೆ ಮತ್ತು ಕೃಷಿ ವ್ಯವಹಾರದ ಲಾಭದಾಯಕತೆಯನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ, ತೋಟಗಾರಿಕೆ ಹಾಗೂ ಪೂರಕ ವ್ಯವಹಾರಗಳ ಬಗೆಗೆ ಸಮುಚಿತ ನೀತಿಗಳನ್ನು ಸೂಚಿಸುವುದು.

·       ಮಾನವ ಪೌಷ್ಠಿಕತೆ ಕುರಿತು ಒತ್ತು ನೀಡುವ ಜೊತೆಗೆ ಸಮಗ್ರ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

·       ಕೃಷಿ ವ್ಯವಹಾರದಲ್ಲಿ ಮಾರುಕಟ್ಟೆ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುವುದು ಹಾಗೂ ವಿವಿಧ ಹಣ್ಣುಗಳು, ತರಕಾರಿ ಬೆಳೆಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಗಾಗಿ ಪ್ರತಿ ವರ್ಷ ಋತುವಿನಿಂದ ಋತುವಿಗೆ ವಿಸ್ತರಣಾ ಸೇವೆಗಳ ಮೂಲಕ ರೈತರಿಗೆ ಮಾಹಿತಿಗಳನ್ನು ಒದಗಿಸುವುದು.        

·       ಕೃಷಿಕರನ್ನು ವ್ಯವಹಾರಸ್ಥರನ್ನಾಗಿ ಭಾಗಿಯಾಗಿಸಿ ಕೃಷಿ ವ್ಯವಹಾರದ ಮುಖಾಂತರ ಕರ‍್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ಕೃಷಿಯ ಅಸ್ಥಿರತೆಯು ಕಡಿಮೆಯಾಗುವುದು ಮತ್ತು ಕೃಷಿ ಕರ‍್ಯಾಚರಣೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದು. ಮಿಶ್ರ ಆಹಾರ ಬೆಳೆಗಳು ಮತ್ತು ನಗದು ಬೆಳೆಗಳು ರೈತರ ಕೈಗೆ ಹೆಚ್ಚು ಆದಾಯವನ್ನು ತಂದುಕೊಡುವುದು.

·       ಕೃಷಿ ವ್ಯವಹಾರ ಪ್ರವೃತ್ತವಾಗಿರುವ ರಫ್ತನ್ನು ಉತ್ತೇಜಿಸುವುದು. ವಿಶೇಷವಾಗಿ ಜೈವಿಕ ಗೊಬ್ಬರವನ್ನು ಬಳಸಿ ಬೆಳೆದಿರುವ ಭಾರತದ ಹಣ್ಣು, ಆಹಾರ ಮತ್ತು ಔಷಧಿಯ ಸುಗಂಧ ಮೂಲಿಕೆಗಳಿಗೆ ಬೇಡಿಕೆಯಿರುವುದು. ವಿಶ್ವವಿದ್ಯಾನಿಲಯವು ಈ ರಫ್ತು ಸಾಮರ್ಥ್ಯದ ಪ್ರಯೋಜನವನ್ನು ಪಡೆಯುವುದು ಮತ್ತು ಆಧುನಿಕ ವ್ಯಾಪಾರ ಅವಕಾಶಗಳ ಅನುಕೂಲತೆಗಳನ್ನು ಪಡೆದುಕೊಳ್ಳುವುದು.

·       ಲಾಭದಾಯಕತೆ ಮತ್ತು ಪರಿಣಾಮಕಾರಿ ವಿಸ್ತರಣಾ ಸೇವೆಗಳನ್ನು ಉತ್ತಮಪಡಿಸಲು ಕೃಷಿ ಕ್ರಮೋಪಾಯಗಳಿಗಾಗಿ ಅಪಾಯ ಸಾಧ್ಯತಾ ನಿರ್ವಹಣಾ ಕಾರ್ಯತಂತ್ರಗಳ ಮುಖಾಂತರ ಗ್ರಾಮೀಣ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಸಬಲೀಕರಿಸುವುದು.

·       ಆಹಾರ ಸಂರಕ್ಷಣೆ, ಕೃಷಿ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು, ಶ್ರೇಣೀಕರಣ ಮಾಡುವುದು ಮತ್ತು ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ನಾವಿನ್ಯತಾ ತಂತ್ರಜ್ಞಾನಗಳಿಗಾಗಿ ಕಾರ್ಯನಿರ್ವಹಿಸುವುದು.

·       ವಿಶೇಷ ಕೃಷಿ ವ್ಯವಹಾರ ಮಾದರಿಗಳನ್ನು ವಿಕಾಸಗೊಳಿಸಲು ಮುಖ್ಯ ವ್ಯವಸ್ಥಾಪನಾ ವಿಧಾನಗಳ ಸಮರ್ಪಕ ಸಂಯೋಜನೆಯೊಂದಿಗೆ ವ್ಯವಹಾರ ಸ್ನೇಹಿ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.

·       ವ್ಯಾಪಾರ ಸಮಾವೇಶಗಳು, ಕೃಷಿ ಮೇಳಗಳು, ಕೃಷಿ ಯೋಜನೆಗಳು ಮುಂತಾದವುಗಳಂಥ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸುವುದು.


    ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಶಾಲೆ

  •   ಎಲ್ಲಾ ವಿವಿಧ ಕರಕುಶಲತೆಯನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.
  • ಗ್ರಾಮೀಣ ಪ್ರದೇಶದಲ್ಲಿನ ಅತ್ಯಂತ ಕೌಶಲ್ಯ ಇರುವ ಗ್ರಾಮೀಣ ಕುಶಲಕರ್ಮಿಗಳನ್ನು ಗುರುತಿಸುವುದು ಮತ್ತು ಅವರ ಕೌಶಲ್ಯಗಳು ಇತರ ಕುಶಲಕರ್ಮಿಗಳಿಗೆ ಪ್ರಚುರಪಡಿಸುವುದು;
  • ವಿನೂತನ ಮತ್ತು ಉಪಯುಕ್ತ ಕೃಷಿ ಸಾಧನಗಳನ್ನು ಮತ್ತು ಸಲಕರಣೆಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಆಹಾರ ಧಾನ್ಯಗಳು, ಆಹಾರೋತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳಿಗಾಗಿ ದಾಸ್ತಾನು ಸೌಕರ್ಯಗಳನ್ನು ಅನ್ವೇಷಿಸುವುದು, ವಿನ್ಯಾಸಮಾಡುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಕೃಷಿ, ಹೈನು, ಪ್ರಾಣಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗಾಗಿ ಪ್ಯಾಕ್ ಮಾಡುವ ಸಾಮಗ್ರಿಯನ್ನು ಮತ್ತು ಸಂರಕ್ಷಣಾ ತಂತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ತೋಟಗಾರಿಕೆ ಮತ್ತು ಪುಷ್ಪ ಕೃಷಿ, ರೇಷ್ಮೆ ಕೃಷಿ ಮುಂತಾದ ಕ್ಷೇತ್ರದಲ್ಲಿ ವಿನೂತನ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು;
  • ಜಾಗತಿಕ ಮಾರುಕಟ್ಟೆಗಳ ಅವಶ್ಯಕತೆಗಳಿಗೆ ಪಾಲುದಾರರನ್ನು ಪರಿಚಯಿಸುವುದು;
  • ಸಿರಿಧಾನ್ಯಗಳು (millets) ತರಕಾರಿಗಳು ಮುಂತಾದA ಪೌಷ್ಠಿಕಾಂಶಯುಕ್ತ, ಕಡಿಮೆ ವೆಚ್ಚದ, ದೇಶೀಯ ಆಹಾರ ಉತ್ಪನ್ನಗಳ ಉತ್ಪಾದನೆಗಾಗಿ ರೈತರಿಗೆ ಉತ್ತೇಜನ ನೀಡುವುದು;
  • ದೇಶೀಯ ಮತ್ತು ಪೌಷ್ಠಿಕಾಂಶಯುಕ್ತ ಬೆಳೆಗಳು, ತರಕಾರಿ ಮತ್ತು ಹಣ್ಣುಗಳ ಮಾದರಿ ಕೃಷಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು;
  • ನಿಷ್ಕೃಷ್ಟ (precision) ಬೇಸಾಯಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಕೃಷಿ ಭೂಮಿಗಳನ್ನು ದತ್ತು ತೆಗೆದುಕೊಳ್ಳುವುದು;
  • ಪಾಳುಭೂಮಿ, ಚವಳುಭೂಮಿ, ಜೌಗುಭೂಮಿ, ಕ್ಷಾರೀಯಭೂಮಿ ಹಾಗೂ ಇನ್ನಿತರ ಸಮಸ್ಯಾತ್ಮಕ ಭೂಮಿಗಳನ್ನು ಸಾಗುವಳಿ ಮತ್ತು ಪ್ರಯೋಜನದ ಅಡಿಯಲ್ಲಿ ತರಲು ಅವುಗಳಿಗಾಗಿ ವಿನೂತನ ವಿಧಾನಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು;
  • ನೀರು ಮತ್ತು ಇಂಧನದ ಸ್ವಾವಲಂಬನೆ ಮತ್ತು ಸಮರ್ಥ ಬಳಕೆಯನ್ನು ಸೃಜಿಸುವುದು;
  • ಹಣ್ಣು ಮತ್ತು ಮರಮುಟ್ಟುಗಳ ರೂಪದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳನ್ನು ಹಾಗೂ ಉಪಯುಕ್ತವಾಗುವ ಗಿಡಮರಗಳನ್ನು ಬೆಳೆಸಲು ಉತ್ತೇಜಿಸುವುದು ಮತ್ತು ಜೈವಿಕ ವೈವಿದ್ಯತೆಯನ್ನು ನಿರ್ವಹಿಸುವುದು;
  • ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಉದ್ಯಮಶೀಲತ್ವವನ್ನು ಉತ್ತೇಜಿಸಲು ಸಾಮರ್ಥ್ಯ ವೃದ್ಧಿಗಾಗಿ ಕ್ಷೇತ್ರೀಯ ಮತ್ತು ಕ್ಷೇತ್ರೀಯೇತರ ತರಬೇತಿ ಕಾರ್ಯಕ್ರಮಗಳನ್ನು, ಕಾರ್ಯಗಾರಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸುವುದು;
  • ಆರ್ಥಿಕ ವ್ಯವಸ್ಥಾಪನೆಯಲ್ಲಿ ಹಿತಾಸಕ್ತರಿಗೆ ತರಬೇತಿ ನೀಡುವುದು;
  • ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಪ್ರಚುರಪಡಿಸುವುದು;
  • ವ್ಯಕ್ತಿಗತ ವ್ಯವಹಾರ ಯೋಜನೆಗಳು ಮತ್ತು ಅಂಕಣಿತ ಯೋಜನೆಗಳನ್ನು ಸಿದ್ಧಪಡಿಸುವುದು


      ಸಾಮಾಜಿಕ ವಿಜ್ಞಾನ ಮತ್ತು ಗ್ರಾಮೀಣ ಪುನಾರಚನಾ ಶಾಲೆ

  • ಕರ್ನಾಟಕದ ಗ್ರಾಮೀಣ ಸಮಾಜಶಾಸ್ತç, ಸಂಸ್ಕೃತಿ, ತತ್ವಶಾಸ್ತç ಮತ್ತು ಧಾರ್ಮಿಕ ಮೌಲಿಕ ವ್ಯವಸ್ಥೆಗಳ ಅಧ್ಯಯನ ಮಾಡುವುದು.
  • ಗ್ರಾಮೀಣ ಜನತೆಯ ಶಿಕ್ಷಣ ಮತ್ತು ಅವರ ದೇಶೀಯ ಜ್ಞಾನ ಮತ್ತು ಕೌಶಲ್ಯತೆಯ ಪ್ರಯೋಜನ ಪಡೆಯಲು ಸಾಮಾಜಿಕ ಆಂದೋಲನವನ್ನು ರೂಪಿಸುವುದು.
  • ವಿವಿಧ ಬೆಂಬಲಿತ ವ್ಯವಸ್ಥೆಗಳು ಮತ್ತು ಪುನರ್ವಸತಿ ಕಾರ್ಯಕ್ರಮಗಳ ಮೂಲಕ ವಿಕಲಚೇತನ ವ್ಯಕ್ತಿಗಳು, ನಿರ್ಗತಿಕ ಮತ್ತು ವಯಸ್ಸಾದ ವ್ಯಕ್ತಿಗಳನ್ನು ಸಬಲೀಕರಿಸುವುದು.
  • ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವಿನ ಅಂತರಗಳನ್ನು ಕಡಿಮೆ ಮಾಡಲು ವಿನೂತನ ವಸತಿ ಮತ್ತು ಆವಾಸ ಸ್ಥಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ಸಹಭಾಗಿತ್ವ ಗ್ರಾಮೀಣ ಮೌಲ್ಯನಿರ್ಣಯ (ಪಿಆರ್) ತಂತ್ರಗಳo ಸಾಮಾಜಿಕ ಸ್ವರೂಪ ನಿರ್ಣಯ   ಸಹಭಾಗಿತ್ವ ಮಾರ್ಗಗಳ  ಮೂಲಕ ಎಲ್ಲಾ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು.
  • ಸಮಾಜದ ಆರ್ಥಿಕವಾಗಿ ದುರ್ಬಲರಾದ ವರ್ಗದವರಲ್ಲಿ ಸಾಮಾಜಿಕ ಉದ್ಯಮಶೀಲತೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಸಾಮಾಜಿಕ ಸಮಸ್ಯೆಗಳ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮುಖಾಂತರ ಪರಿಹಾರಗಳನ್ನು ಕಂಡುಹಿಡಿಯುವುದು.
  • ಲಿo ವಿವಾದಗಳು, ಬಾಲಕಾರ್ಮಿಕರು, ಜೀತದಾಳುಗಳು ಮತ್ತು ದೇವದಾಸಿ ಪದ್ಧತಿ ಮುಂತಾದA ಅನಿಷ್ಟ ಆಚರಣೆಗಳ ವಿಷಯಗಳ ಕುರಿತಾದ ಕ್ಷೇತ್ರದಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದು.
  • ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳಿಂದ ಬರುವ ನಿಧಿಗಳನ್ನು ಸೂಕ್ತ ಯೋಜನೆಗಳು ಮತ್ತು ನಾವಿನ್ಯತಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ವಿನಿಯೋಗಿಸುವುದು.
  • ವಿವಿಧ ಸಾಮಾಜಿಕ ಸಮೂಹಗಳ, ಅದರಲ್ಲೂ ವಿಶೇಷವಾಗಿ ಪಂಚಾಯತ್ ರಾಜ್ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವುದು.
  • ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮೂಲಕ ಅನುಷ್ಠಾನಗೊಂಡಿರುವ ಯೋಜನೆಗಳ ಮೌಲ್ಯ ನಿರ್ಧರಣೆ ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ನಡೆಸುವುದು.
  • ಅಧಿಸೂಚಿಸಿರದ ಬುಡಕಟ್ಟುಗಳು, ತಮ್ಮದೇ ಆದ ಮನೆ, ಗ್ರಾಮ ಅಥವಾ ಭೂಮಿಗಳನ್ನು ಹೊಂದಿರದ ಜನರು, ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಸಮುದಾಯಗಳು, ಬುಡಕಟ್ಟುಗಳು ಮುಂತಾದo ಎಲ್ಲಾ ಸಮುದಾಯಗಳ ಮತ್ತು ಅಭಿವೃದ್ಧಿಯಾಗಿಲ್ಲದ ಸಾಮಾಜಿಕ ಸಮೂಹಗಳ ಕ್ಷೇಮಾಭಿವೃದ್ಧಿಗೆ ಸಂಬAಧಿಸಿದ ನೀತಿಯ ಮೇಲೆ ಸರ್ಕಾರಕ್ಕೆ ಸಲಹೆ ನೀಡುವುದು.
  • ವಿಚಾರ ಸಂಕಿರಣಗಳು, ಕಾರ್ಯಗಾರಗಳು, ಕ್ಷೇತ್ರಕಾರ್ಯವಿಭಾಗ, ವಿದ್ಯಾರ್ಥಿಗಳ ಸಾಮಾಜಿಕಾಭಿವೃದ್ಧಿ ಪ್ರಯೋಗಾರ್ಥಿಗಳ ಭಾಗೀದಾರರು, ಜನಪ್ರತಿನಿಧಿಗಳು ಮುಂತಾದವರಿಗೆ ವ್ಯಾಸಂಗ ಕ್ರಮ ವಿಷಯಗಳನ್ನು (Course contents) ಅಭಿವೃದ್ಧಿಪಡಿಸುವುದು.

ಪರಿಸರ ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲ್ಯ ವ್ಯವಸ್ಥಾಪನಾ ಶಾಲೆ

·       ·   ಪರಿಸರ ಸಮಸ್ಯೆಗಳು ಮತ್ತು ಮಾನವನ ಆರೋಗ್ಯ, ಕೃಷಿ ಉತ್ಪಾದನೆ, ಜಲಮಾಲಿನ್ಯ, ನೀರಿನ ಕೊರತೆ, ವಾಯು ಮಾಲಿನ್ಯ, ಮಣ್ಣಿನ ಸವೆತ, ಅರಣ್ಯ ನಾಶ, ಜೈವಿಕ ವೈವಿಧ್ಯತೆ ನಷ್ಟ, ಹವಾಮಾನ ಬದಲಾವಣೆ ಮುಂತಾದವುಗಳ ಮೇಲೆ ಅವುಗಳ ಪರಿಣಾಮವನ್ನು ಕುರಿತು ಅಧ್ಯಯನ ಮಾಡುವುದು.
·       ಬರ, ಪ್ರವಾಹ, ಭೂಕಂಪ, ಕಾಡ್ಗಿಚ್ಚು ಮುಂತಾದವುಗಳA ಪ್ರಕೃತಿಕ ವಿಕೋಪಗಳ ವಿರುದ್ಧ ವಿಪತ್ತು ನಿರ್ವಹಣೆ, ಪುನಃಸ್ಥಾಪನೆ ಮತ್ತು ಪುನರ್ವಸತಿ ಪರಿಹಾರ ಕಾರ್ಯತಂತ್ರಗಳನ್ನು ರೂಪಿಸುವುದು.
·       ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಇಂಧನ ಉಳಿತಾಯ, ಇಂಧನ ಕಾರ್ಯಕ್ಷಮತೆ ಮತ್ತು ಸಂಪ್ರದಾಯಿಕವಲ್ಲದ  ಇಂಧನ ಬಳಕೆ, ಸೌರಶಕ್ತಿ ಮತ್ತು ವಾಯು ಇಂಧನ, ಜೈವಿಕ ರಾಶಿ, ಜೈವಿಕ ಅನಿಲ, ಗೋಬರ್ ಅನಿಲ ಬಳಕೆಯಂಥ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸುವುದು.
·       ಜಲಾನಯನ ನಿರ್ವಹಣೆ, ಜಲಸಂಪನ್ಮೂಲಗಳ ಸರಬರಾಜು ಮತ್ತು ಸಂರಕ್ಷಣೆ, ಸರೋವರ, ತೊರೆ ಮತ್ತು ನದಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ತಾಂತ್ರಿಕತೆಗಳನ್ನು ವಿಕಾಸಗೊಳಿಸುವುದು.
·       ಪರಿಸರ ಹಾನಿ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬಡತನದ ನಡುವೆ ಇರುವ ಸಂಬAಧಕ್ಕೆ ಒತ್ತು ನೀಡಿ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವುದು.
·       ಜನಸಂಖ್ಯಾ ಬೆಳವಣಿಗೆ, ಬಡತನ, ಉತ್ಪಾದಕತೆಯ ನಷ್ಟ ಮತ್ತು ಪರಿಸರ ನಾಶದ ನಡುವಿನ ಆಂತರಿಕ ಸಂಬAಧವನ್ನು ಅಧ್ಯಯನ ಮಾಡುವುದುಗ್ರಾಮೀಣ ಪ್ರದೇಶದಲ್ಲಿನ ಸುಸ್ಥಿರ ಬೆಳವಣಿಗೆ ಮತ್ತು ಅರ್ಥಿಕಾಭಿವೃದ್ದಿ ನಡುವಿನ ಆಂತರಿಕ ಸಂಧವನ್ನು ಪರಸ್ಪರ ಬಲಪಡಿಸುವುದು.
·       ಗ್ರಾಮೀಣ ಪ್ರದೇಶದಲ್ಲಿ ನಿರ್ಮಲ ಪರಿಸರ ಪರಿಕಲ್ಪನೆ ಮತ್ತು ಸಮುದಾಯಿಕ ಆರೋಗ್ಯ ಮತ್ತು  ನೈರ್ಮಲ್ಯ ನಿರ್ವಹಣೆ ವಿಷಯಗಳನ್ನು ಅಧ್ಯಯನ ಮಾಡುವುದು.
·       ಹೆಚ್ಚು ಸಕ್ಷಮ ರೀತಿಯಲ್ಲಿ ನಮ್ಮ ಜಲ ಸಂಪನ್ಮೂಲಗಳನ್ನು ನಾವಿನ್ಯತಾ ತಂತ್ರಜ್ಞಾನಗಳನ್ನು ರೂಪಿಸುವುದು. ಅರೆ ಬಂಜರಾದ ಮಳೆನೀರು ಆಧಾರಿತ ಕೃಷಿ ಪ್ರದೇಶಕ್ಕಾಗಿ, ವಿಶೇಷವಾಗಿ ಸ್ಥಳೀಯವಾಗಿ ತಯಾರಿಸಿರುವ, ಯುಕ್ತ ಸಾಧನಗಳನ್ನು ಬಳಸಿ ಕಿರು ನೀರಾವರಿ ತಂತ್ರಜ್ಞಾನವÀನ್ನು ರೂಪಿಸುವುದು. ನೀರಾವರಿ ಪ್ರದೇಶದಲ್ಲಿಯೂ ಸಂಯೋಜಿತ ನೀರು ಬಳಕೆ ವಿಧಾನಗಳಿಗೆ ಪ್ರೋತ್ಸಾಹ ನೀಡುವುದು.
·       ಗ್ರಾಮೀಣ ಪ್ರದೇಶದಲ್ಲಿ ಬಡತನ ನಿರ್ಮೂಲನೆಗೆ ಪ್ರಮುಖವಾಗಿರುವತಂಹ ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ದಿಯಲ್ಲಿ ಅಡಕವಾಗಿರುವ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವುದು.

        ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಶಾಲೆ

  • ಪಂಚಾಯತ್ ರಾಜ್‌ನ ಭಾಗವಹಿಸುವಿಕೆ, ಬಲಪಡಿಸುವಿಕೆ, ವಿಕೇಂದ್ರೀಕರಣ, ಅಭಿವೃದ್ಧಿ ಚಟುವಟಿಕೆ ಇತ್ಯಾದಿಗಳನ್ನು ಅಧಿಕಗೊಳಿಸುವ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸಂಶೋಧನೆಯನ್ನು ಪ್ರವರ್ತಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳ ಜನ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮುಂತಾದವರಿಗೆ ಅಭಿವಿನ್ಯಾಸ/ ಪುನಶ್ಚೇತನ ಕಾರ್ಯಕ್ರಮಗಳನ್ನು ಸಂಘಟಿಸಲು ಸಮುಚಿತ ಪ್ರಾಧಿಕಾರಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಸಂವಿಧಾನಿಕ ಉಪಬಂಧಗಳಿಗೆ ಮತ್ತು ಸಂಬಂಧಿತ ಕಾನೂನುಗಳ ಅನುಷ್ಠಾದಲ್ಲಿನ ಅಡ್ಡಿ – ಆತಂಕಗಳ (Bottlenecks) ಬಗೆಗೆ ಅಧ್ಯಯನ ಮಾಡುವುದು ಮತ್ತು ಸುಧಾರಣೆಗಳನ್ನು ಸೂಚಿಸುವುದು.
  • ಸ್ತ್ರೀಯರ, ದುರ್ಬಲ ವರ್ಗದವರ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಲು ಕಾರ್ಯತಂತ್ರಗಳನ್ನು ರೂಪಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳ ಉತ್ತಮ ಆಚರಣೆಗಳನ್ನು ರೂಪಿಸುವುದು ಮತ್ತು ಪ್ರಕಟಣೆ ಮತ್ತು ಸಂಪರ್ಕ ಸಂವಹನ ಮಾಧ್ಯಮಗಳ ಮುಖಾಂತರ ಅವನ್ನು ಪ್ರಚುರಪಡಿಸಲು ಏರ್ಪಾಡು ಮಾಡುವುದು.ಸಂಪರ್ಕ-ಸಂವಹನಾಭಿವೃದ್ಧಿ ಅಧ್ಯಯನ ಮಾಡುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)
29
Jan

2023-24 ನೇ ಸಾಲಿನ  ಎರಡನೇ ಸೆಮಿಸ್ಟರ್ (ರೆಗ್ಯುಲರ್ ಮತ್ತು ರಿಪೀಟರ್ಸ್) ಫಲಿತಾಂಶ ಮತ್ತು ಮರುಮೌಲ್ಯಮಾಪನದ ಅಧಿಸೂಚನೆ

23
Sep
2023ನೇ ಜುಲೈನಲ್ಲಿ ನಡೆದ ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 2ನೇ ಸೆಮಿಸ್ಟರ್, ಬಿ. ಏಸ್ಸಿ (ಎ. ಬಿ. & ಎಫ್.ಫಿ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಎ. ಬಿ. & ಎಫ್.ಫಿ ) 4ನೇ ಸೆಮಿಸ್ಟರ್ ,ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ

ಕಾರ್ಯಕ್ರಮಗಳು

24
Apr
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ "ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ Read More
22
Apr
ಬೀದರ್ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ(2ನೇ ಬ್ಯಾಚ್)” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
16
Apr
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
2
Apr
ಬೆಳಗಾವಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More


Follow us on